ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಪೈವಳಿಕೆ ಸಮೀಪ ಸುಬ್ಬಯ್ಯಕಟ್ಟೆ ಎಂಬಲ್ಲಿ ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಬಾವಿಗಿಳಿದ ಕೂಲಿ ಕಾರ್ಮಿಕ ಸಹೋದರರಿಬ್ಬರು ಸಾವಪ್ಪಿದ ಘಟನೆ ವರದಿಯಾಗಿದೆ.
ಮೃತರನ್ನು ನಾರಾಯಣ(50) ಮತ್ತು ಸಹೋದರ ಶಂಕರ(40) ಎಂದು ಗುರುತಿಸಲಾಗಿದೆ.
ಶಂಕರ ಅವರು ಬಾವಿಗೆ ಬಿದ್ದ ಕರು ಮೇಲೆತ್ತಲು ಹಗ್ಗದ ಮೂಲಕ ಬಾವಿಗೆ ಇಳಿದಿದ್ದು, ಬಾವಿಯಲ್ಲಿ ಉಸಿರಾಡಲಾಗದೇ ಕುಸಿದು ಬಿದ್ದಿದ್ದರು. ಈ ಸಂದರ್ಭ ಸಹೋದರನ ರಕ್ಷಣೆಗೆ ನಾರಾಯಣ ಇಳಿದಿದ್ದು, ಅವರು ಕೂಡ ಉಸಿರಾಡಲಾಗದೇ ಕುಸಿದು ಬಿದ್ದಿದ್ದಾರೆ.
ಉಪ್ಪಳದ ಅಗ್ನಿಶಾಮಕ ದಳ ಸಿಬಂದಿ ಇವರಿಬ್ಬರನ್ನು ಮೇಲಕ್ಕೆತ್ತಿದರೂ ಇಬ್ಬರೂ ಅಷ್ಟರಲ್ಲೇ ಸಾವಪ್ಪಿದ್ದರು. ಕರುವನ್ನು ಮೇಲಕ್ಕೆತ್ತಲಾಗಿದ್ದು, ಕರು ಸುರಕ್ಷಿತವಾಗಿದೆ.